Select Your Language

Notifications

webdunia
webdunia
webdunia
webdunia

ಹಿಂದಿನವರು ಏನು ಕಡಿದು ಕಟ್ಟೆ ಹಾಕಿದ್ರು ಅಂತ ನಮ್ಮ ಬಗ್ಗೆ ಮಾತಾಡ್ತಾರೆ? ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರಶ್ನೆ

ಹಿಂದಿನವರು ಏನು ಕಡಿದು ಕಟ್ಟೆ ಹಾಕಿದ್ರು ಅಂತ ನಮ್ಮ ಬಗ್ಗೆ ಮಾತಾಡ್ತಾರೆ? ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪ್ರಶ್ನೆ
ಸೌಥಾಂಪ್ಟನ್ , ಗುರುವಾರ, 6 ಸೆಪ್ಟಂಬರ್ 2018 (09:36 IST)
ಸೌಥಾಂಪ್ಟನ್: ಇಂಗ್ಲೆಂಡ್ ಮತ್ತು ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿದ್ದಕ್ಕೇ ಈಗಿನ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ಮೇಲೆ ಟೀಕೆ ಮಾಡುತ್ತಿರುವವರ ಮೇಲೆ ರವಿಶಾಸ್ತ್ರಿ ಸಿಡಿದೆದ್ದಿದ್ದಾರೆ.

ಕಳೆದ 10-15 ವರ್ಷಗಳಲ್ಲಿ ಯಾವುದೇ ಕ್ರಿಕೆಟಿಗರು ಮಾಡದಷ್ಟು ಸಾಧನೆ, ರನ್ ಈ ತಂಡ ಮಾಡಿದೆ. ಹಿಂದೆಯೂ ಸಚಿನ್, ದ್ರಾವಿಡ್ ರಂತಹ ಶ್ರೇಷ್ಠ ಕ್ರಿಕೆಟಿಗರು ತಂಡದಲ್ಲಿದ್ದಾಗಲೂ ಭಾರತ ವಿದೇಶದಲ್ಲಿ ಸರಣಿ ಸೋತಿದೆ. ಹೀಗಿರುವಾಗ ನಾವು ಎರಡು ಸರಣಿ ಸೋತಿದ್ದಕ್ಕೇ ಇಷ್ಟೊಂದು ಟೀಕೆ ಮಾಡುತ್ತಿರುವುದೇಕೆ?

ಹಾಗೆ ನೋಡಿದರೆ ಕಳೆದ ಎರಡು ಮೂರು ವರ್ಷಗಳಲ್ಲಿ ನಾವು ವಿದೇಶದಲ್ಲಿ 9 ಪಂದ್ಯಗಳನ್ನು ಮತ್ತು ಮೂರು ಸರಣಿಗಳನ್ನು ಗೆದ್ದಿದ್ದೇವೆ ಎಂದು ಕೋಚ್ ಶಾಸ್ತ್ರಿ ತಮ್ಮ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿ ಸೋತ ಬಳಿಕ ರವಿಶಾಸ್ತ್ರಿ ಹಾಗೂ ಇತರ ಕ್ರಿಕೆಟಿಗರ ಮೇಲೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಟೀಕಾ ಪ್ರಹಾರವನ್ನೇ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರವಿಶಾಸ್ತ್ರಿ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಅಶ್ವಿನ್ ಗೇ ಟಾಂಗ್ ಕೊಟ್ಟ ಟೀಂ ಇಂಡಿಯಾ ಆಟಗಾರ!