Select Your Language

Notifications

webdunia
webdunia
webdunia
webdunia

ಆಟಗಾರರನ್ನು ಹೇಗೆ ನಡೆಸಿಕೊಳ್ಳಬೇಕೆಂದು ವಿರಾಟ್ ಕೊಹ್ಲಿಗೆ ಗಂಗೂಲಿ ಕೊಟ್ಟ ಸಲಹೆ ಏನು ಗೊತ್ತಾ?

ಆಟಗಾರರನ್ನು ಹೇಗೆ ನಡೆಸಿಕೊಳ್ಳಬೇಕೆಂದು ವಿರಾಟ್ ಕೊಹ್ಲಿಗೆ ಗಂಗೂಲಿ ಕೊಟ್ಟ ಸಲಹೆ ಏನು ಗೊತ್ತಾ?
ಕೋಲ್ಕೊತ್ತಾ , ಶನಿವಾರ, 15 ಸೆಪ್ಟಂಬರ್ 2018 (09:17 IST)
ಕೋಲ್ಕೊತ್ತಾ: ನಾಯಕನಾಗಿ ಟೀಂ ಇಂಡಿಯಾಕ್ಕೆ ಹಲವು ಯುವ ಪ್ರತಿಭೆಗಳನ್ನು ಪರಿಚಯಿಸಿದ ಕೀರ್ತಿ ಹೊಂದಿದ್ದ ನಾಯಕ ಸೌರವ್ ಗಂಗೂಲಿ. ಇದೀಗ ಸತತ ಸೋಲಿನಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿಗೆ ಮಾಜಿ ನಾಯಕ ಗಂಗೂಲಿ ಅಮೂಲ್ಯ ಸಲಹೆಯೊಂದನ್ನು ಕೊಟ್ಟಿದ್ದಾರೆ.

ಟೀಂ ಇಂಡಿಯಾದಲ್ಲಿ ಚೇತೇಶ್ವರ ಪೂಜಾರ, ರೆಹಾನೆ, ರಾಹುಲ್ ರಂತಹ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಆದರೆ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೇಗೆ ಹೊರ ತೆಗೆಯಬೇಕು ಎಂದು ಕೊಹ್ಲಿಗೆ ಗಂಗೂಲಿ ಸಲಹೆ ಕೊಟ್ಟಿದ್ದಾರೆ.

‘ಈ ಆಟಗಾರರು ಹತ್ತು ಪಾಲು ಅತ್ಯುತ್ತಮ ಕ್ರಿಕೆಟಿಗರು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಪಂದ್ಯಕ್ಕೆ ಮೊದಲು ಈ ಆಟಗಾರರ ಬಳಿ ಹೋಗಿ ಅವರ ಹೆಗಲಿಗೆ ಕೈ ಹಾಕಿ ಸ್ನೇಹದಿಂದ ನೀನೇ ಈ ಪಂದ್ಯ ಗೆಲ್ಲಿಸಿಕೊಡಬೇಕು ಎಂದು ಪ್ರೀತಿಯಿಂದ ಜವಾಬ್ಧಾರಿ ನೀಡಬೇಕು. ಸದ್ಯದ ಪರಿಸ್ಥಿತಿಯ ಅಗತ್ಯ ಇದುವೇ. ಅದನ್ನು ಕೊಹ್ಲಿ ಮಾಡಬೇಕು. ಆಟಗಾರರ ಸಾಮರ್ಥ್ಯಕ್ಕನುಗುಣವಾಗಿ ಅವರಿಂದ ಕೆಲಸ ಹೊರ ತೆಗೆಯುವ ಕಲೆ ಅವರು ಅರಿತುಕೊಳ್ಳಬೇಕು’ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಉತ್ತರಾಧಿಕಾರಿ ಯಾರು? ಕೊನೆಗೂ ಸಿಕ್ಕಿದೆ ಉತ್ತರ!