Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಪಂದ್ಯದ ಮೊದಲ ದಿನ ಕ್ಲಿಕ್ ಆದ ಕರ್ನಾಟಕ ಬೌಲರ್ ಗಳು

ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಪಂದ್ಯದ ಮೊದಲ ದಿನ ಕ್ಲಿಕ್ ಆದ ಕರ್ನಾಟಕ ಬೌಲರ್ ಗಳು
ನಾಗ್ಪುರ , ಸೋಮವಾರ, 12 ನವೆಂಬರ್ 2018 (17:22 IST)
ನಾಗ್ಪುರ: ಈ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ಎದುರು ಮೊದಲ ಪಂದ್ಯವಾಡುತ್ತಿರುವ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ ಎದುರಾಳಿಯ 8 ವಿಕೆಟ್ ಕಿತ್ತು 245 ರನ್ ಗೆ ನಿಯಂತ್ರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಆರಂಭದಲ್ಲೇ 2 ವಿಕೆಟ್ ಕಿತ್ತು ಸಂಕಷ್ಟಕ್ಕೀಡಾಯಿತು. ಈ ಸಂದರ್ಭದಲ್ಲಿ ಜತೆಯಾದ ವಾಸಿಂ ಜಾಫರ್ ಹಾಗೂ ಗಣೇಶ್ ಸತೀಶ್ ಉತ್ತಮ ಜತೆಯಾಟವಾಡಿ ಚೇತರಿಕೆ ನೀಡಿದರು.

ಆದರೆ ನಂತರ ಕರ್ನಾಟಕ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಕೀಳುತ್ತಾ ಹೋದರು. ಹೀಗಾಗಿ ವಿದರ್ಭದ ದೊಡ್ಡ ಮೊತ್ತದ ಕನಸು ಈಡೇರಲಿಲ್ಲ. ಕರ್ನಾಟಕದ ಪರ ವೇಗಿ ಅಭಿಮನ್ಯು ಮಿಥುನ್ ಮತ್ತು ಜಗದೀಶ ಸುಚಿತ್ ತಲಾ 3 ವಿಕೆಟ್ ಕಿತ್ತರೆ, ನಾಯಕ ವಿನಯ್ ಕುಮಾರ್ ಮತ್ತು ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪಾಪಚ್ಚಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಮಾಡಿದ ದಾಖಲೆಗಳಿವು