Select Your Language

Notifications

webdunia
webdunia
webdunia
webdunia

ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ಯಾಕೆ?

ಟಾಲಿವುಡ್ ನಟ ಪವನ್ ಕಲ್ಯಾಣ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ಯಾಕೆ?
ಹೈದರಾಬಾದ್ , ಬುಧವಾರ, 11 ಜುಲೈ 2018 (07:46 IST)
ಹೈದರಾಬಾದ್ : ಸಿನಿಮಾರಂಗದಿಂದ ದೂರ ಸರಿದು ರಾಜಕೀಯದಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ ಅವರು  ತಮ್ಮ ಸಿನಿಮಾ ಜೀವನದ ಆರಂಭದ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರಂತೆ.


ಭಾನುವಾರ ವಿಶಾಖಪಟ್ಟಣಂನಲ್ಲಿ ಜನಸೇನಾ ಪಕ್ಷದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಪವನ್ ಕಲ್ಯಾಣ ಅವರು ತಮ್ಮ ಸಿನಿಮಾ ಜೀವನದ ಆರಂಭದ ದಿನಗಳನ್ನು ನೆನೆಪಿಸಿಕೊಳ್ಳುವುದರ ಮೂಲಕ ತಾವು ನಟಿಸಿದ 'ಸುಸ್ವಾಗತಂ' ಚಿತ್ರೀಕರಣ ಸಮಯದಲ್ಲಿ ಎದುರಾದ ಘಟನೆಯೊಂದನ್ನು ಬಹಿರಂಗ ಪಡಿಸಿದ್ದಾರೆ.


‘ಸಿನಿಮಾ ರಂಗಕ್ಕೆ ಬಂದ ಆರಂಭದಲ್ಲಿ ತಮಗೆ ಸಂಕೋಚದ ಮನೋಭಾವ ಹೆಚ್ಚಿತ್ತು. 'ಸುಸ್ವಾಗತಂ' ಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನ್ನೊಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಬಸ್​ ಮೇಲೆ ಹತ್ತಿ ಸಾವಿರಾರು ಜನರ ನೋಡುತ್ತಿದ್ದಾಗ ಡ್ಯಾನ್ಸ್​ ಮಾಡಬೇಕೆಂದು ಹೇಳಿದ್ದರು. ಇದರಿಂದ ನಾನು ತುಂಬಾ ಭಯ ಬಿದ್ದು, ಏನು ಮಾಡೋದು ಎಂದು ತಿಳಿಯದೇ ಅತ್ತಿಗೆ ಸುರೇಖಾಗೆ ಫೋನ್ ಮಾಡಿದೆ. ನಾನು ಸಿನಿಮಾದಲ್ಲಿ ನಟಿಸಲು ಸರಿ ಹೋಗುವುದಿಲ್ಲ ಎಂದು ಅತ್ತಿಗೆಗೆ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ತಿಳಿಸಿದ್ದೆ’ ಎಂದು ಪವನ್ ಕಲ್ಯಾಣ್​ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿಗೆ ಅವಹೇಳನ ; ನಟ ಸಿದ್ದೀಕಿ, ನಿರ್ಮಾಪಕರ ವಿರುದ್ಧ ದೂರು