Select Your Language

Notifications

webdunia
webdunia
webdunia
webdunia

ನಟ ಸುದೀಪ್, ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಕೊಟ್ಟ ಭರವಸೆ ಏನು ಗೊತ್ತಾ….?

ನಟ ಸುದೀಪ್, ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಕೊಟ್ಟ ಭರವಸೆ ಏನು ಗೊತ್ತಾ….?
ಬೆಂಗಳೂರು , ಶುಕ್ರವಾರ, 23 ಫೆಬ್ರವರಿ 2018 (06:34 IST)
ಬೆಂಗಳೂರು : ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಕಷ್ಟದಲ್ಲಿರುವ ಬಿಗ್ ಬಾಸ್ ಸೀಸನ್ 5 ರ ರನ್ನರ್ ಆಫ್ ಆಗಿರುವ ದಿವಾಕರ್ ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ.


ಬಡ ಕುಟುಂಬದಿಂದ ಬಂದಿರುವ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ತಿಳಿದ ಕಿಚ್ಚ ಸುದೀಪ್ ಅವರು ದಿವಾಕರ್ ಹಾಗು ಅವರ ಪತ್ನಿ ಅವರನ್ನು ಮನೆಗೆ ಕರೆಸಿಕೊಂಡು ಹಣದ ನೆರವು ನೀಡಿದ್ದಾರೆ. ಈ ಕುರಿತು ದಿವಾಕರ್ ಅವರು ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ತಿಳಿಸಿದ್ದು, ‘ತಮ್ಮನ್ನು ಸುದೀಪ್ ಅವರು ಪ್ರೀತಿಯಿಂದ ನಡೆಸಿಕೊಂಡು, ಒಂದು ದೊಡ್ಡ ಮೊತ್ತದ ಹಣ ನೀಡಿದ್ದಾರೆ. ಈ ಹಣದಿಂದಲ್ಲೇ  ನಾನು ಮನೆಯನ್ನು ಕಟ್ಟಿಕೊಳ್ಳಲು ಯೋಚಿಸಿದ್ದೇನೆ. ಹಾಗೂ ತಮ್ಮ ಮುಂದಿನ ಚಿತ್ರಗಳಲ್ಲಿ ನನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ವತ್ ಸ್ಥಿತಿ ನೋಡಿ ಸಿಟ್ಟಿಗೆದ್ದ ಶಿವಣ್ಣ