Select Your Language

Notifications

webdunia
webdunia
webdunia
webdunia

ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು 'ಆರ್‌ಎಕ್ಸ್' 100 ಚಿತ್ರತಂಡ ಮಾಡಿದ್ದೇನು ಗೊತ್ತಾ?

ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು 'ಆರ್‌ಎಕ್ಸ್' 100 ಚಿತ್ರತಂಡ ಮಾಡಿದ್ದೇನು ಗೊತ್ತಾ?
ಹೈದರಾಬಾದ್ , ಶುಕ್ರವಾರ, 24 ಆಗಸ್ಟ್ 2018 (10:08 IST)
ಹೈದರಾಬಾದ್ : ಕೇರಳದ ಪ್ರವಾಹ ಸಂತ್ರಸ್ತರಿಗಾಗಿ ಹಲವು ನಟ ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್ ನ  'ಆರ್‌ಎಕ್ಸ್' 100 ಚಿತ್ರತಂಡ ಪ್ರವಾಹ ಸಂತ್ರಸ್ತರಿಗೆ ಹೊಸ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದೆ.


ಭಾರಿ ಮಳೆ, ಪ್ರವಾಹದ ಕಾರಣ ಕೇರಳದಲ್ಲಿ ಹಲವಾರು ಮಂದಿ ಸಾವು ನೋವು ಅನುಭವಿಸಿದ್ದಾರೆ. ಅದೆಷ್ಟೋ ಮಂದಿ ನಿರಾಶ್ರಿತರಾಗಿದ್ದಾರೆ. ಅಂತವರಿಗೆ ಸಹಾಯ ಮಾಡಲು 'ಆರ್‌ಎಕ್ಸ್' 100  ಚಿತ್ರತಂಡ ಆ ಸಿನಿಮಾದಲ್ಲಿ ಬಳಸಿರುವ 'ಆರ್‌ಎಕ್ಸ್ 100' ಬೈಕನ್ನು ಹರಾಜಿಗೆ ಇಟ್ಟಿದೆ. ಹರಾಜಿನಲ್ಲಿ ಬಂದ ಹಣವನ್ನು ಕೇರಳ ಪ್ರವಾಹ ಪೀಡಿತರಿಗೆ ನೀಡುವುದಾಗಿ ಹೇಳಿದೆ.


ಅಜಯ್ ಭೂಪತಿ ನಿರ್ದೇಶನದಲ್ಲಿ ಮೂಡಿಬಂದ ಟಾಲಿವುಡ್ ನ  'ಆರ್‌ಎಕ್ಸ್' 100 ಚಿತ್ರ ಕಡಿಮೆ ಬಜೆಟ್ ನಲ್ಲಿ ಬಿಡುಗಡೆಯಾಗಿ  ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಲ್ಲಿ ಕಾರ್ತಿಕೇಯ, ಪಾಯಲ್ ರಾಜ್‌ಪೂತ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಾಪ್​ ನಟಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ ಈಗ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?