Select Your Language

Notifications

webdunia
webdunia
webdunia
webdunia

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಕನ್ನಡ ಚಿತ್ರರಂಗದವರಿಗೇಕೆ ಭೀತಿ?

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಕನ್ನಡ ಚಿತ್ರರಂಗದವರಿಗೇಕೆ ಭೀತಿ?
ಬೆಂಗಳೂರು , ಭಾನುವಾರ, 27 ಮೇ 2018 (06:35 IST)
ಬೆಂಗಳೂರು : ಕನ್ನಡ ಚಿತ್ರರಂಗದವರಿಗೆ ಇದೀಗ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಭೀತಿ ಉಂಟಾಗಿದೆಯಂತೆ.


ಇದಕ್ಕ ಕಾರಣವೆನೆಂದರೆ ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿನಯದ  'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಇದೀಗ ಕೇರಳದಲ್ಲಿ ನಡೆಯುತ್ತಿದೆ. ಈಗಾಗಲೇ ಕೇರಳದಲ್ಲಿ ನಿಫಾ ವೈರಸ್‍ಗೆ 10 ಜನರು ಬಲಿಯಾಗಿರುವ ಸುದ್ದಿ ತಿಳಿದುಬಂದಿದೆ. ಮೊದಲೇ ಅಂಬರೀಶ್ ಅವರ ಆರೋಗ್ಯ ಕೂಡ ಸರಿಯಿಲ್ಲ. ಆದಕಾರಣ  ಈ ಚಿತ್ರತಂಡ ಕೇರಳದಿಂದ ವಾಪಾಸು ಬರುವವರೆಗೂ ಕನ್ನಡ ಚಿತ್ರರಂಗದವರಲ್ಲಿ  ಭೀತಿ ಕಾಡುತ್ತಿದೆ.

ಆದರೆ ಚಿತ್ರದ ನಿರ್ಮಾಪಕ ಜ್ಯಾಕ್ ಮಂಜು ಅವರು,’ 'ನಾವು ಹಣ್ಣು ಮತ್ತು ಹಣ್ಣಿನ ಜ್ಯೂಸ್ ಸೇವಿಸೋದೆ ಬಿಟ್ಟಿದ್ದೇವೆ. ನೀರನ್ನು ಕೂಡ ಕುದಿಸಿ ಕುಡಿಯುತ್ತಿದ್ದೇವೆ. ಇನ್ನೊಂದು ವಾರದ ಶೂಟಿಂಗ್ ಮುಗಿಸಿಕೊಂಡು ಅಲ್ಲಿಂದ ವಾಪಸ್ಸಾಗುತ್ತೇವೆ' ಎಂದು ಸಂದೇಶ ಕಳುಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಧಿಕಾ ಶರತ್ ಕುಮಾರ್ ಗೆ ಬ್ಲಡ್ ಕ್ಯಾನ್ಸರಾ? ಈ ಬಗ್ಗೆ ರಾಧಿಕಾರವರು ಹೇಳಿದ್ದೇನು ಗೊತ್ತಾ?