Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗಕ್ಕೆ ಮರಳಿ ಬಂದ ಯಮುನಾ

ಕನ್ನಡ ಚಿತ್ರರಂಗಕ್ಕೆ ಮರಳಿ ಬಂದ ಯಮುನಾ
ಬೆಂಗಳೂರು , ಮಂಗಳವಾರ, 27 ಸೆಪ್ಟಂಬರ್ 2016 (12:07 IST)
ಬಹುಭಾಷಾ ತಾರೆ ಯಮುನಾ ಮತ್ತೆ ಮರಳಿ ಬಂದಿದ್ದಾರೆ. ಧಿಡೀರ್ ಅಂತ ಪ್ರತ್ಯಕ್ಷವಾಗಿದ್ದಾರೆ. ಕನಸುಗಾರ ರವಿಚಂದ್ರನ್ ಜತೆಗೆ 'ಚಿನ್ನ' ಚಿತ್ರದಲ್ಲಿ ನಟಿಸಿದ್ದ ಯಮುನಾ, ತೆಲಗು ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದರು. ಆದ್ರೆ ಈ ನಟಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಈಗ ಕನ್ನಡದ 'ರಾಜಹಂಸ' ಚಿತ್ರದ ಮೂಲಕ ಮತ್ತೆ ಮರು ಪ್ರವೇಶಿಸಿದ್ದಾರೆ. 

 
2011ರಲ್ಲಿ ಯಮುನಾ ವಿರುದ್ಧ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಅವರು ನಡೆಸಿದ ಕಾನೂನು ಹೋರಾಟದಲ್ಲಿ ಕಡೆಗೆ ನ್ಯಾಯಾಲಯ ನಿರ್ದೋಷಿ ಎಂದು ಸಾಬೀತು ಮಾಡಿದೆ. ಆ ವೇಳೆ ಅವರು ಅನುಭವಿಸಿದ್ದ ನೋವು ಅವರನ್ನು ಆತ್ಮಹತ್ಯೆಗೆ ದೂಡಿತ್ತು. 
 
 ನೋವಿನಿಂದ ಹೊರಬಂದ ಬಗ್ಗೆ ಅವರು ಮಾತನಾಡಿದ್ದಾರೆ. ತೆಲಗು ದಾರವಾಹಿಗಳಲ್ಲಿ ಬ್ಯೂಸಿಯಾಗಿದ್ದಾರೆ. ಕನ್ನಡಕ್ಕೆ ಆಫರ್ ಬಂದ್ರು ನೋವಾಗಿದ್ದ ಕಾರಣಕ್ಕೆ ನಿರಾಕರಿಸಿದ್ರಂತೆ. ಒಂದು ಹಂತದಲ್ಲಿ ಅವರು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರಂತೆ. 
 
ತಮ್ಮ ಮೇಲಿನ ಆರೋಪ ಷಡ್ಯಂತ್ರ ಎನ್ನುವ ಅವರು, ಯಾರೋ ಬೇಕಂತಲೇ ಮಾಡಿದ್ದು ಎಂದು ಹೇಳಿದ್ದಾರೆ. ಕಷ್ಟದಲ್ಲಿದ್ದಾಗ ಕುಟುಂಬದ ಸದಸ್ಯರ ಬೆಂಬಲ ನೀಡಿ ಧೈರ್ಯ ಹೇಳಿದರು. ಕನ್ನಡ ಹಾಗೂ ತೆಲಗು ಚಿತ್ರರಂಗದ ಅನೇಕರು ನೈತಿಕ ಸ್ಥೈರ್ಯ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವಾರದಂದು ತೆರೆ ಕಾಣಲಿದೆ ಧೋನಿ ಜೀವನಾಧಾರಿತ ಚಿತ್ರ