Select Your Language

Notifications

webdunia
webdunia
webdunia
webdunia

ರಾಘವ ಲಾರೆನ್ಸ್ ನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ ಶ್ರೀರೆಡ್ಡಿ

ರಾಘವ ಲಾರೆನ್ಸ್ ನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ ಶ್ರೀರೆಡ್ಡಿ
ಹೈದರಾಬಾದ್ , ಭಾನುವಾರ, 21 ಅಕ್ಟೋಬರ್ 2018 (08:15 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿಗೆ ಇದೀಗ ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ.


ಹೌದು, ನಟಿ ಶ್ರೀರೆಡ್ಡಿಗೆ ನಿರ್ದೇಶಕ, ನಟ ರಾಘವ ಲಾರೆನ್ಸ್ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದಾರಂತೆ.  ತಮಿಳು ಸಿನಿಮಾ ಒಂದರಲ್ಲಿ ಶ್ರೀರೆಡ್ಡಿ ಮುಖ್ಯ ಪಾತ್ರದಲ್ಲಿ ಕಾಣಿಸಕೊಳ್ಳಲಿದ್ದಾರಂತೆ. ಈ ವಿಚಾರವನ್ನು ಶ್ರೀರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿರುವ ಶ್ರೀರೆಡ್ಡಿ, ರಾಘವ ಲಾರೆನ್ಸ್ ಅವರ ಮನೆಯಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಅವರ ಆಥಿತ್ಯ ಚೆನ್ನಾಗಿತ್ತು. ಅವರ ಮುಂದಿನ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಗಾಗಲೇ ಆಡಿಷನ್‌ ನಲ್ಲೂ ಆಯ್ಕೆಯಾಗಿದ್ದೇನೆ. ಅವರು ನನಗೆ ಅಡ್ವಾನ್ಸ್ ಹಣವನ್ನು ನೀಡಿದ್ದಾರೆ. ಆ ಹಣವನ್ನು ನಾನು ಶ್ರೀಕಾಕುಲಂ ಜನರಿಗೆ ನೀಡಿದ್ದೇನೆ. ಯಾಕಂದರೆ ಅಲ್ಲಿಯ ಜನ ಸದ್ಯ ಸೈಕ್ಲೋನ್‌ ನಿಂದಾಗಿ ಪರದಾಡುತ್ತಿದ್ದಾರೆ ಅಂತ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಸರ್ಜಾ ಮೇಲಿನ ಶೃತಿ ಆರೋಪದ ಕುರಿತು ‘ವಿಸ್ಮಯ’ ಚಿತ್ರದ ನಿರ್ದೇಶಕ ಹೇಳಿದ್ದೇನು ಗೊತ್ತೇ…?