Select Your Language

Notifications

webdunia
webdunia
webdunia
webdunia

ನಟ ಫ​ರ್ಹಾನ್​​ ಅಖ್ತರ್ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಿಡಿಕಾರಿದ್ಯಾಕೆ?

ನಟ ಫ​ರ್ಹಾನ್​​ ಅಖ್ತರ್ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಿಡಿಕಾರಿದ್ಯಾಕೆ?
ಕೋಲ್ಕತ್ತಾ , ಸೋಮವಾರ, 20 ಆಗಸ್ಟ್ 2018 (14:10 IST)
ಕೋಲ್ಕತ್ತಾ : ಪಠ್ಯ ಪುಸ್ತಕದಲ್ಲಿ ಬಳಸಿದ ಫೋಟೊವೊಂದರ ಕುರಿತು ಇದೀಗ ಬಾಲಿವುಡ್ ನಟ ಫ​ರ್ಹಾನ್​​ ಅಖ್ತರ್ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


ಹೌದು, ಪಠ್ಯ ಪುಸ್ತಕವೊಂದರಲ್ಲಿ ಅಥ್ಲೇಟ್​ ಮಿಲ್ಖಾ ಸಿಂಗ್​ ಸಾಧನೆಗಳ ಕುರಿತು ವಿವರಿಸಲಾಗಿದೆ. ಆದರೆ ಮಿಲ್ಖಾ ಸಿಂಗ್​ ಚಿತ್ರದ ಬದಲು 2013ರಲ್ಲಿ ತೆರೆ ಕಂಡ `ಭಾಗ್​ ಮಿಲ್ಖಾ ಭಾಗ್'​ ಚಿತ್ರದ ನಾಯಕ ಫರ್ಹಾನ್​​ ಅಖ್ತರ್​ ಪೋಸ್ಟರ್​ ನ್ನು ಪಠ್ಯದಲ್ಲಿ ಬಳಸಿದ್ದಾರೆ.


ಈ ವಿಷಯ ತಿಳಿದ ನಟ ಫ​ರ್ಹಾನ್​​ ಅಖ್ತರ್ ಇದನ್ನು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಗೆ ಟ್ವೀಟ್​ ಮಾಡಿ, “ವಿದ್ಯಾರ್ಥಿಗಳ ಓದುವ ಪಠ್ಯದಲ್ಲಿ ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ಇದನ್ನು ಕೂಡಲೇ ಸರಿಪಡಿಸಿ ಅಥ್ಲೇಟಿಕ್​ ಲೆಜೆಂಡ್​ ಮಿಲ್ಖಾ ಸಿಂಗ್​ ಅವರ ಫೋಟೋವನ್ನು ಬಳಸಬೇಕು. ವಿದ್ಯಾರ್ಥಿಗಳ ಪುಸ್ತಕಗಳನ್ನು ಕೂಡಲೇ ಬದಲಿಸಿ” ಎಂದು ಆಗ್ರಹಿಸಿದ್ದಾರೆ. ಹಾಗೇ ಈ ಟ್ವೀಟ್​ನ್ನು ಟಿಎಂಸಿ ನಾಯಕ ಡೆರೆಕ್​ ಒ'ಬ್ರೇನ್​ಗೆ ಟ್ಯಾಗ್​ ಮಾಡಿದ್ದು, ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಅವರು , ಈ ಮಾಹಿತಿಯನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹ ಪೀಡಿತ ಕೊಡಗಿಗೆ ಸ್ಯಾಂಡಲ್ ವುಡ್ ನೆರವಾಗಿದ್ದು ಹೇಗೆ ಗೊತ್ತಾ?