Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 12 ಜನವರಿ 2019 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಂದು ಸುಖ-ದುಃಖ ಎರಡೂ ಸಮನಾಗಿ ಇರಲಿದೆ. ಅಸಿಡಿಟಿ, ಹೊಟ್ಟೆಯುರಿಯಂತಹ ಸಮಸ್ಯೆಯಿಂದ ದೈನಂದಿನ ಜೀವನಕ್ಕೆ ತೊಂದರೆಯಾಗುವುದು. ಉದ್ಯೋಗದಲ್ಲಿ ನಿರೀಕ್ಷಿತ ಮುನ್ನಡೆಯಿದ್ದರೂ ಕಾರ್ಯದ ಒತ್ತಡದಿಂದ  ಹೈರಾಣಾಗುವಿರಿ.

ವೃಷಭ: ಮನೆಯಲ್ಲಿ ಮಂಗಲ ಕಾರ್ಯಗಳನ್ನು ನೆರವೇರಿಸಲು ಮುಂದಾಗುವಿರಿ. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಕಾರ್ಯ ಕ್ಷೇತ್ರದಲ್ಲಿ ಕೈ ಹಿಡಿದ ಕಾರ್ಯಗಳು ನೆರವೇರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಮಿಥುನ: ಬಂಧು ಮಿತ್ರರಿಂದ ವಂಚನೆಗೊಳಗಾಗುವ ಸಂಭವವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕಾಟಕ್ಕಾಗಿ ದೂರ ಸಂಚಾರ ಮಾಡಬೇಕಾಗಬಹುದು. ಮನೆಗಾಗಿ ಹೊಸ ವಸ್ತುಗಳ ಖರೀದಿ ಮಾಡುವಿರಿ. ವಿವಾಹಿತರಿಗೆ ಸರಸಮಯ ಕ್ಷಣ ಕಳೆಯುವ ಅವಕಾಶ.

ಕರ್ಕಟಕ: ಕುಟುಂಬದಲ್ಲಿ ಕೊಂಚ ಶಾಂತಿ ಕದಡುವ ಸಂಭವವಿದ್ದರೂ ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಸುಸೂತ್ರವಾಗಲಿದೆ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ತಾಳ್ಮೆಯಿಂದಿದ್ದರೆ ದಿನದಂತ್ಯಕ್ಕೆ ಶುಭ ಸುದ್ದಿ ಸಿಗಲಿದೆ.

ಸಿಂಹ: ವೃತ್ತಿ ರಂಗದಲ್ಲಿ ಅಧಿಕಾರ ವರ್ಗದವರಿಗೆ ಕಿರಿ ಕಿರಿ ಎದುರಾಗಬಹುದು. ಮೇಲಧಿಕಾರಿಗಳಿಂದ ಕಿರುಕುಳ ಅನುಭವಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕುಲದೇವರ ದರ್ಶನ ಪಡೆಯಿರಿ.

ಕನ್ಯಾ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆಗೊಳಗಾಗಿ ಬೇಸರಕ್ಕೊಳಗಾಗುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ ಸಿಗಲಿದೆ. ಆರ್ಥಿಕವಾಗಿ ಧನಾಗಮನವಾಗಿ ನೆಮ್ಮದಿ ಹೊಂದುವಿರಿ. ಸಾಲಗಳು ಮರುಪಾವತಿಯಾಗುವುದು.

ತುಲಾ: ಆರ್ಥಿಕವಾಗಿ ಸಾಕಷ್ಟು ಹಣ ಸಂಪಾದನೆ ಮಾಡುವಿರಿ. ಕೆಲವೊಮ್ಮೆ ಕೆಳ ಹಂತದ ಅಧಿಕಾರಿ ವರ್ಗದವರಿಂದ ಸಹಾಯವೂ ಸಿಗುತ್ತದೆ. ಕುಟುಂಬದಲ್ಲೂ ನೆಮ್ಮದಿಯ ವಾತಾವರಣವಿರುದು. ಒಟ್‍ಟಾರೆ ಇಂದು ಶುಭ ದಿನ.

ವೃಶ್ಚಿಕ: ಹೊಸ ವಸ್ತುಗಳು, ಆಸ್ತಿ, ವಾಹನ ಖರೀದಿಗೆ ಮುಂದಾಗುವಿರಿ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಓಡಾಡಬೇಕಾದೀತು. ಕುಟುಂಬದಲ್ಲಿ ಸಂಗಾತಿಯ ಸಲಹೆಗೆ ಮನ್ನಣೆ ಕೊಡಿ.

ಧನು: ವಿದೇಶ ಪ್ರಯಾಣ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಒದಗಿಬರಲಿದೆ. ದೇವರ ದರ್ಶನ ಪಡೆಯುವಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು.

ಮಕರ: ಉದ್ಯೋಗದಲ್ಲಿ ಎಚ್ಚರಿಕೆಯಿಂದ ಮುನ್ನಡೆದರೆ ಯಶಸ್ಸು. ಉದ್ಯೋಗ ನಿಮಿತ್ತ ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕಾದೀತು. ಆದರೆ ಆರೋಗ್ಯ ಕೈ ಕೊಟ್ಟು ನೆಮ್ಮದಿ ಕಳೆದುಕೊಳ್ಳುವಿರಿ. ದೇವರ ಪ್ರಾರ್ಥನೆ ಮಾಡಿ.

ಕುಂಭ: ಕುಟುಂಬದಲ್ಲಿ ತಾಳ್ಮೆಯಿಂದ ವರ್ತಿಸಿದಷ್ಟೂ ಇಂದು ನಿಮ್ಮ ದಿನ ಶುಭವಾಗುತ್ತದೆ. ಆರ್ಥಿಕವಾಗಿ ವಿಪರೀತ ಖರ್ಚು ವೆಚ್ಚದಿಂದ ಚಿಂತೆಯಾಗುವುದು. ಬೆನ್ನು ನೋವಿನ ಸಮಸ್ಯೆ ಕಾಡಬಹುದು.

ಮೀನ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶ ಅರಸಿ ಬರುವುದು. ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ. ಬಂಧು ಮಿತ್ರರು ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿಯ ವಾರ್ತೆ ನೀಡುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಅವಳಿ ಬಾಳೆಹಣ್ಣನ್ನು ದೇವರ ಪೂಜೆಗೆ ಬಳಸಬಹುದೇ?