Select Your Language

Notifications

webdunia
webdunia
webdunia
webdunia

ವೃತ್ತಿಜೀವನದ ಹಾದಿಯಲ್ಲಿ ಜೋತಿಷ್ಯದ ಪರಿಣಾಮ

ವೃತ್ತಿಜೀವನದ ಹಾದಿಯಲ್ಲಿ ಜೋತಿಷ್ಯದ ಪರಿಣಾಮ
ನವದೆಹಲಿ , ಮಂಗಳವಾರ, 21 ಜೂನ್ 2016 (12:10 IST)
ಜೀವನದ ಸಾಗರವನ್ನು ಮಾನವ ದಾಟಲು ಜಾತಕಕ್ಕಿಂತ ಉತ್ತಮ ದೋಣಿ ಬೇರೊಂದಿಲ್ಲ ಎಂಬ ಮಾತಿದೆ. ಸಂಪೂರ್ಣ ಸಾಮರಸ್ಯದೊಂದಿಗೆ ಜಗತ್ತು ಸಂಪೂರ್ಣ ಸಾಮರ್ಥ್ಯದೊಂದಿಗೆ ಸೃಷ್ಟಿಯಾಗಿರುತ್ತದೆ. ಪ್ರತಿಯೊಂದು ಅಸ್ತಿತ್ವದಲ್ಲಿರುವ ಕಣಗಳು ಉದ್ದೇಶ ಹೊಂದಿರುತ್ತವೆ. ನಮ್ಮ ಸುತ್ತಲೂ ಕಾಣುವ ಸಸ್ಯಗಳು, ಪ್ರಾಣಿಗಳು, ಬೆಟ್ಟಗಳು ನದಿಗಳು ಇತ್ಯಾದಿಗಳು ಅವುಗಳ ಪ್ರಸಕ್ತ ರೂಪದಲ್ಲಿರಲು ಖಚಿತ ಕಾರಣವಿರುತ್ತದೆ.

ನಮ್ಮ ತಕ್ಷಣದ ಜಗತ್ತು ಮತ್ತು ದೂರದ ಜಗತ್ತು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಪ್ರಶ್ನೆಗೆ ಅನೇಕ ಮಂದಿ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಅಂತಹ ಒಂದು ನಿಗೂಢತೆ ಮಾನವ ಜೀವನದ ಮೇಲೆ ಸೌರಮಂಡಲದ ಗ್ರಹಗಳಿಂದ ಉಂಟಾಗುವ ಪ್ರಭಾವ. ಗಾಳಿ ಮತ್ತು ನೀರು ನಮ್ಮ ಜೀವನದ ಮೇಲೆ ಪ್ರಮುಖ ಪಾತ್ರ ವಹಿಸುವಂತೆ ಗ್ರಹಗಳು ಕೂಡ ಪಾತ್ರವಹಿಸುತ್ತವೆ.
 
 ಗ್ರಹಗಳು ದೂರದಲ್ಲಿದ್ದರೂ ಕೂಡ ಅವು ಆಕಾಶ ಕಾಯಗಳಾಗಿದ್ದು ಪ್ರತಿಯೊಂದು ನಿರ್ದಿಷ್ಟ ಗುಣ, ಲಕ್ಷಣಗಳನ್ನು ಹೊಂದಿರುತ್ತವೆ. ವೇದ ಜ್ಯೋತಿಷ್ಯದ ಮಸೂರಗಳ ಮೂಲಕ ಆಮೂಲಾಗ್ರ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಿದಾಗ ಈ ಗ್ರಹಗಳಿಂದ ಮಾನವ ಜೀವಿಯ ಮೇಲೆ ಪರಿಣಾಮಗಳು ನಮ್ಮ ಕಲ್ಪನೆಗೂ ನಿಲುಕದಷ್ಟು ಆಗಿರುತ್ತದೆ. ಇದಲ್ಲದೇ ನಮ್ಮ ವೃತ್ತಿಜೀವನದ ಆಯ್ಕೆಗಳು, ವೃತ್ತಿಜೀವನದ ಬೆಳವಣಿಗೆಗೆ ಮತ್ತು ವೃತ್ತಿಪರ ರೇಖೆಯ ಮೇಲೆ ಪ್ರಭಾವ ಬೀರುತ್ತವೆ.
 
ಆದ್ದರಿಂದ ವೃತ್ತಿ ಜ್ಯೋತಿಷ್ಯವು ಪ್ರಾಮುಖ್ಯತೆ ಗಳಿಸುತ್ತಿದ್ದು, ಜನ್ಮ ಕುಂಡಲಿಯ ವಿಸ್ತೃತ ಅಧ್ಯಯನವಾಗಿದ್ದು, ಅನೇಕ ಅಂಶಗಳನ್ನು ಒಳಗೊಂಡಿದೆ. ಪ್ರತಿಯೊಂದು ಗ್ರಹವು ವೈಯಕ್ತಿಕ ಲಕ್ಷಣಗಳಿಂದ ನಮ್ಮ ವೃತ್ತಿಜೀವನದ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಗುರು ಗ್ರಹವು ವೃತ್ತಿಜೀವನದಲ್ಲಿ ಸಂಪತ್ತು ಮತ್ತು ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಕಲ್ಪನೆಯ ಗ್ರಹ ಶುಕ್ರವು ನಮ್ಮ ಸೃಜನಶೀಲತೆ ಮತ್ತು ಸ್ವಂತಿಕೆ ಮೇಲೆ ಪ್ರಭಾವ ಬೀರುತ್ತದೆ. ಕೆಂಪು ಗ್ರಹ ಮಂಗಳ
ನಮ್ಮ ಕಾರ್ಯನಿಷ್ಠೆ ಮತ್ತು ಗಮನದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದೇ ರೀತಿ ಇತರೆ ಗ್ರಹಗಳು ವೃತ್ತಿಜೀವನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ.
 
ನಮ್ಮ ಜನ್ಮ ಕುಂಡಲಿಯಲ್ಲಿ ವೃತ್ತಿಜೀವನದ ಮನೆಯಲ್ಲಿ ಗ್ರಹಗಳ ಅಸ್ತಿತ್ವವು ನಮ್ಮ ವೃತ್ತಿಜೀವನ ಕ್ಷೇತ್ರವನ್ನು ನಿರ್ಧರಿಸುವ ಪ್ರಮುಖ ಮಾನದಂಡವಾಗಿದೆ. ಇದಲ್ಲದೇ ಗ್ರಹಗಳ ಚಲನೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೇ ಮುಖ್ಯ ಅವಧಿ, ಉಪಅವಧಿಗಳು ವೃತ್ತಿಜೀವನದ ಏರುಪೇರುಗಳನ್ನು, ತಿರುವುಗಳನ್ನು ನಿರ್ಧರಿಸುತ್ತದೆ.
 
 ಇವೆಲ್ಲಾ ಅಂಶಗಳ ಸಂಯೋಜನೆಯು ಒಂದು ಗೊತ್ತಾದ ಅವಧಿಯಲ್ಲಿ ವ್ಯಕ್ತಿಯ ವೃತ್ತಿಯನ್ನು ಕುರಿತು ಭವಿಷ್ಯ ಹೇಳುತ್ತದೆ.  ಇವೆಲ್ಲಾ ಅಂಶಗಳ ಪರಿಣಾಮವನ್ನು ನಿಖರವಾಗಿ ವಿಶ್ಲೇಷಿಸಲು ಸಮರ್ಥ ಜ್ಯೋತಿಷಿಗೆ ಮಾತ್ರ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಕ್ಕೆ ಮುಂಚೆ ಸಂಗಾತಿಗಳ ನಡುವೆ ಹೊಂದಾಣಿಕೆ ಅತ್ಯವಶ್ಯಕ