Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರಲು 5 ಸೋಮವಾರ ಈ ರೀತಿಯಲ್ಲಿ ಪೂಜೆ ಮಾಡಿ

ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರಲು 5 ಸೋಮವಾರ ಈ ರೀತಿಯಲ್ಲಿ ಪೂಜೆ ಮಾಡಿ
ಬೆಂಗಳೂರು , ಬುಧವಾರ, 9 ಜನವರಿ 2019 (08:15 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹ ಸ್ಥಿತಿಗಳು ಸರಿಯಾಗಿ ಇಲ್ಲದೆ ಇದ್ದರೆ ಆರ್ಥಿಕ ಕಷ್ಟಗಳು , ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ.  5 ಸೋಮವಾರ ಈ ರೀತಿ ಪರಿಹಾರವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.


ಜಾತಕದಲ್ಲಿ ಚಂದ್ರನ ಅನುಗ್ರಹವಿದ್ದರೆ ಎಲ್ಲಾ ವಿಷಯಗಳಲ್ಲಿ ಯಶಸ್ಸು ಕಾಣಬಹುದು. ಈ ಚಂದ್ರನ ಅನುಗ್ರಹ ಪಡೆಯಲು ಶಿವರಾಧನೆ ಮಾಡಬೇಕು. ಸೋಮವಾರ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನವನ್ನಾಚರಿಸಿ ನಿತ್ಯ ಪೂಜೆಯನ್ನು ಮಾಡಿದ ನಂತರ ಶಿವಪೂಜೆ ಮಾಡಬೇಕು.


 ಇದಕ್ಕಾಗಿ ಒಂದು ಮಣೆಯ ಮೇಲೆ 8 ಕಮಲದ ಹೂವು ಅಥವಾ 8 ದಳಗಳಿರುವ ಹೂಗಳನ್ನು ಇಡಬೇಕು. ನಂತರ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನು ಹಾಸಬೇಕು. ಅದರ ಮೇಲೆ ಅರ್ಧ ಕೆಜಿ ಅಕ್ಕಿಯನ್ನು ಹಾಕಿ ಆ ಅಕ್ಕಿಯ ಮೇಲೆ ಓಂ ಚಿತ್ರ ಬಿಡಿಸಿ ಶಿವಲಿಂಗ ಇಡಬೇಕು. ಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ ಮನಸ್ಸಿನ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು. ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ ಆರತಿ ಬೆಳಗಬೇಕು. ಈ ಪೂಜೆ ಮುಗಿದ ಬಳಿಕ ಬಡವರಿಗೆ ಆ ಅಕ್ಕಿಯನ್ನು ದಾನ ಮಾಡಬೇಕು. ಹೀಗೆ 5 ಸೋಮವಾರ ಇದೇ ರೀತಿಯಲ್ಲಿ ಪೂಜೆ ಮಾಡಿ ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರುತ್ತದೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?