Select Your Language

Notifications

webdunia
webdunia
webdunia
webdunia

ಕಾಗೆಯಿಂದ ಉಂಟಾಗುವುದು ಶುಭ, ಅಶುಭ

ಕಾಗೆಯಿಂದ ಉಂಟಾಗುವುದು ಶುಭ, ಅಶುಭ
ಬೆಂಗಳೂರು , ಶುಕ್ರವಾರ, 8 ಡಿಸೆಂಬರ್ 2017 (07:33 IST)
ಬೆಂಗಳೂರು: ಯಾವುದೇ ಪ್ರಾಣಿಗಳು ಹಾಗು ಪಕ್ಷಿಗಳು ನಮ್ಮ ಸಂಪ್ರದಾಯಕ್ಕೆ ಸಂಬಂಧಿಸಿವೆ. ಹೊರಗೆ ಹೋಗುವಾಗ ಪ್ರಾಣಿ ಅಥವಾ ಪಕ್ಷಿ ಎದುರು ಬಂದ್ದರೆ ಶುಭ ಹಾಗು ಅಶುಭ ಎಂದು ಹೇಳುತ್ತಾರೆ. ಇದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ.


ಕಾಗೆ ಬಗ್ಗೆ ನಮ್ಮಲ್ಲಿ ತುಂಬಾ ನಂಬಿಕೆಗಳಿವೆ. ನಮ್ಮ ಪೂರ್ವಿಕರ ಪ್ರಕಾರ ಮನುಷ್ಯರ ಹುಟ್ಟು ಸಾವು ಕಾಗೆಯೊಂದಿಗೆ ಬೆಸೆದುಕೊಂಡಿದೆ. ಹಾಗೆ ಸತ್ತು ಹೋಗಿರುವ ನಮ್ಮ ಪೂರ್ವಿಕರು ಕಾಗೆ ರೂಪದಲ್ಲಿ ಅಲೆಯುತ್ತಾರೆ ಎಂದು ಸಹ ಹೇಳುತ್ತಾರೆ. ಕಾಗೆ ನಮಗೆ ಭವಿಷ್ಯದ ಸೂಚನೆಗಳನ್ನು ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹೊರಗೆ ಹೋಗುವಾಗ ಕಾಗೆ ಜೋರಾಗಿ ಕಿರುಚಿದರೆ ಹೋಗುವ ಕಾರ್ಯ ಯಶಸ್ವಿಯಾಗುತ್ತದೆ  ಎನ್ನುತ್ತಾರೆ. ತುಂಬಿದ ಮಡಿಕೆ ಮೇಲೆ ಕುಳಿತ ಕಾಗೆಯನ್ನು ನೋಡಿದರೆ ಅವರು ಧನವಂತರಾಗುತ್ತಾರೆ.


ಕಾಗೆ ಬಾಯಲ್ಲಿದ್ದ  ಆಹಾರ  ಪದಾರ್ಥಗಳನ್ನು ಯಾರ ಮೇಲಾದರು ಎಸೆದರೆ ಅದು ಅಶುಭ. ಹಾಗೆ ಅದರ ಬಾಯಲ್ಲಿದ್ದ ಮಾಂಸ ಪದಾರ್ಥಗಳು ಯಾರ ಮೇಲಾದರು ಬಿದ್ದರೆ ಅವರಿಗೆ ಮೃತ್ಯು ಸಂಭವಿಸುತ್ತದೆ ಎಂದು ಜೋತಿಷ್ಯರು ಹೇಳುತ್ತಾರೆ. ಗಂಡಸರು ಅಥವಾ ಹೆಂಗಸರ ಮೇಲೆ ಹೋಗಿ ಬಡಿದರೆ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕಾಗೆ ಗುಂಪೊಂದು ಮನೆಯ ಬಳಿ ಕಿರುಚಿದರೆ ಆ ಮನೆಯವರಿಗೆ ಏನೋ ಸಮಸ್ಯ ಎದುರಾಗಿದೆ ಎಂದರ್ಥ. ಕಾಗೆ ಹೆಂಗಸರ ತಲೆ ಮೇಲೆ ಕುಳಿತರೆ ಆಕೆಯ ಪತಿಗೆ ಸಮಸ್ಯೆಯಾಗುತ್ತದೆ ಎಂದು ಜೋತಿಷ್ಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪರ್ಸ್ ನಲ್ಲಿಟ್ಟ ಈ ವಸ್ತುಗಳಿಂದ ಉಂಟಾಗುವುದು ಧನ ನಷ್ಟ