Select Your Language

Notifications

webdunia
webdunia
webdunia
webdunia

ನೀವು ಮಲಗುವಾಗ ಈ ನಿಯಮ ಪಾಲಿಸಿದರೆ ಸುಖ ನಿದ್ದೆ ನಿಮ್ಮದಾಗುತ್ತದೆಯಂತೆ

ನೀವು ಮಲಗುವಾಗ ಈ ನಿಯಮ ಪಾಲಿಸಿದರೆ ಸುಖ ನಿದ್ದೆ ನಿಮ್ಮದಾಗುತ್ತದೆಯಂತೆ
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (20:19 IST)
ಬೆಂಗಳೂರು : ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆಗೆ ಜಾರುವವರನ್ನು ಪುಣ್ಯಾತ್ಮರು ಎನ್ನುತ್ತಾರೆ. ಯಾಕೆಂದರೆ ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ.  ಒಂದು ವೇಳೆ ತಕ್ಷಣ ನಿದ್ರೆ ಬಂದರೂ ಕೂಡ ಕೆಲವೊಮ್ಮೆ ಕೆಟ್ಟ ಕನಸು ಬಿದ್ದು ತಕ್ಷಣ ಎಚ್ಚರವಾಗುತ್ತದೆ . ಇದರಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಆದ್ದರಿಂದ ನೀವು ಸುಖವಾಗಿ  ನಿದ್ದೆ ಮಾಡಬೇಕೆಂದರೆ ಮಲಗುವಾಗ ಈ ರೀತಿ ಮಾಡಿ.


*ನಿದ್ದೆ ಮಾಡುವಾಗ ಕೆಟ್ಟ ಸ್ವಪ್ನ ಬೀಳುತ್ತಿದ್ದರೆ ಮಲಗುವ ಮುನ್ನ ಹನುಮಾನ್ ಚಾಲೀಸ್ ಅಥವಾ ಸುಂದರ್ ಖಾಂಡ್ ಪಠಣ ಮಾಡಿ ಮಲಗಿರಿ. ಆ ಪುಸ್ತಕ ನಿಮ್ಮ ತಲೆ ದಿಂಬಿನ ಕೆಳಗಿರಲಿ. ಇದರಿಂದ ಒತ್ತಡ ಹಾಗೂ ಭಯ ಕಡಿಮೆಯಾಗುತ್ತದೆ.

*ಹಾಸಿಗೆಯ ಬಳಿ ಕಬ್ಬಿಣದ ವಸ್ತುವನ್ನಿಟ್ಟು ಮಲಗುವುದರಿಂದ ನಕಾರಾತ್ಮಕ ಶಕ್ತಿ ಹತ್ತಿರ ಸುಳಿಯುವುದಿಲ್ಲ.

*ಮಾನಸಿಕ ಒತ್ತಡಕ್ಕೊಳಗಾಗಿದ್ದರೆ ಹಾಸಿಗೆ ಬಳಿ ಮೂಲಂಗಿ ಇಟ್ಟು ಮಲಗಿರಿ. ಬೆಳಗ್ಗೆ ಆ ಮೂಲಂಗಿಯನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಿ.

*ದಿಂಬಿನ ಕೆಳಗೆ ದೇವರಿಗೆ ಅರ್ಪಿಸಿದ ಹೂವನ್ನಿಟ್ಟು ಮಲಗುವುದರಿಂದ ಸುಖ ನಿದ್ರೆ ಬರುತ್ತದೆ.

*ಬೆಳ್ಳುಳ್ಳಿ ಅದೃಷ್ಟದ ಸಂಕೇತ. ಹಾಗಾಗಿ ಮಲಗುವ ವೇಳೆ ಜೇಬಿನಲ್ಲಿ ಅಥವಾ ದಿಂಬಿನ  ಬಳಿ ಬೆಳ್ಳುಳ್ಳಿ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಐದು ಜನರಿಗೆ ಊಟ ಹಾಕಿದರೆ ನಿಮ್ಮ ಪಾಪಗಳು ನಿವಾರಣೆಯಾಗುತ್ತದೆಯಂತೆ